ಲೋಕಸಭಾ ಎಲೆಕ್ಷನ್ ಹೈ ಅಲರ್ಟ್ :ಏನುಂಟು ಏನಿಲ್ಲ ಇಲ್ಲಿದೆ ಸಂಪೂರ್ಣ್ ಮಾಹಿತಿ !

ಬೆಳಗಾವಿ : ಬೆಳಗಾವಿ ನಗರದ ಆರ್‌ಪಿಡಿ ಕಾಲೇಜಿನಲ್ಲಿ ನಡೆಯಲಿರುವ ಬೆಳಗಾವಿ ಲೋಕಸಭೆ ಮತಕ್ಷೇತ್ರದ ಚುನಾವಣೆಯ ಮತ ಎಣಿಕೆಯ ಕಾರ್ಯಕ್ರಮಕ್ಕಾಗಿ ವಿಶೇಷ ವಾಹನ ಪಾರ್ಕಿಂಗ್ ಮತ್ತು ಡೈವರ್ಶನ್ ವ್ಯವಸ್ಥೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ಪ್ರಕಟಿಸಿದ್ದಾರೆ. 

promotions

ವಾಹನ ಪಾರ್ಕಿಂಗ್ ವ್ಯವಸ್ಥೆ:

promotions

1. ಮತ ಎಣಿಕೆ ಕರ್ತವ್ಯದಲ್ಲಿರುವ ಅಧಿಕಾರಿ, ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳು : 

 ಭಾಗ್ಯನಗರ 2ನೇ ಕ್ರಾಸ್ ಮೂಲಕ, ಲೋಕಮಾನ್ಯ ಮಲ್ಟಿಪರ್ಪೋಸ್ ಕೋ-ಆಪರೇಟಿವ್ ಸೋಸಾಯಟಿಯನ್ನು ದಾಟಿ, ಎಡತಿರುವು ಪಡೆದು, ಮಾವಿನ ತೋಟದ ಗೇಟ ಮೂಲಕ ಆರ್‌ಪಿಡಿ ಕಾಲೇಜು ಮೈದಾನದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬಹುದು.

2. ಅಭ್ಯರ್ಥಿಗಳು

ಆರ್‌ಪಿಡಿ ಕಾಲೇಜಿನ 1ನೇ ಗೇಟ್ ಮೂಲಕ ಪ್ರವೇಶಿಸಿ ತಮ್ಮ ವಾಹನಗಳನ್ನು ಕೆಎಲ್‌ಎಸ್ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ನಿಲುಗಡೆ ಮಾಡಬೇಕು.

3. ಏಜೆಂಟರು

ಗೋಮಟೇಶ್ ಹೈಸ್ಕೂಲ್, ಹಿಂದವಾಡಿ ಶಾಲಾ ಮೈದಾನದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ, ನಡೆದುಕೊಂಡು ಮತ ಎಣಿಕೆ ಕೇಂದ್ರಕ್ಕೆ ಬರಬಹುದು.

4. ಸಾರ್ವಜನಿಕರು

 ಗೋಕಾಕ, ಅರಭಾವಿ, ಭಾಗಗಳಿಂದ ಬರುವವರು ಲೇಲೆ ಮೈದಾನ ಮತ್ತು ವ್ಯಾಕ್ಸಿನ್ ಡಿಮೋ ಮೈದಾನದಲ್ಲಿ ತಮ್ಮ ವಾಹನಗಳನ್ನು ಪಾರ್ಕ್ ಮಾಡಬಹುದು.

 ಬೈಲಹೊಂಗಲ, ರಾಮದುರ್ಗ, ಸೌಂದತ್ತಿ ಯಲ್ಲಮ್ಮಗುಡ್ಡ ಭಾಗಗಳಿಂದ ಬರುವವರು ಹಳೆ ಪಿಬಿ ರಸ್ತೆ, ನಾಥಪೈ ಸರ್ಕಲ್ ಮೂಲಕ ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಎಡಬದಿಯ ಆದರ್ಶ ನಗರ ಶಾಲಾ ಮೈದಾನದಲ್ಲಿ ಅಥವಾ ಆದರ್ಶ ನಗರ ರಸ್ತೆ ಪಕ್ಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದು.

ಬೆಳಗಾವಿ ಉತ್ತರ, ದಕ್ಷಿಣ, ಗ್ರಾಮೀಣ ಭಾಗಗಳಿಂದ ಬರುವವರು 3ನೇ ರೇಲ್ವೆ ಗೇಟ ಮೂಲಕ ಪೀರನವಾಡಿ ವರೆಗಿನ ರಸ್ತೆ ಪಕ್ಕದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಬಹುದು.

ರಸ್ತೆ ಡೈವರ್ಶನ್:

1. ಗೋವಾವೇಸ್, ಆರ್‌ಪಿಡಿ ರಸ್ತೆ, ಗುರುದೇವ ರಾನಡೆ ರಸ್ತೆ, 1ನೇ ಮತ್ತು 2ನೇ ರೇಲ್ವೆ ಗೇಟ್ ರಸ್ತೆ, ಅನಗೋಳ ರಸ್ತೆ ಮತ್ತು ಭಾಗ್ಯನಗರ ರಸ್ತೆ :

ಮುಂಜಾನೆ 7 ಗಂಟೆಯಿಂದ ಮತ ಎಣಿಕೆ ಮುಕ್ತಾಯದವರೆಗೆ ಈ ರಸ್ತೆಗಳಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು.

2. ಗೋವಾವೇಸ್ ಸರ್ಕಲ್:

 ಗೋವಾವೇಸ್ ಸರ್ಕಲ್ ಕಡೆಯಿಂದ ಆರ್‌ಪಿಡಿ ಸರ್ಕಲ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಮಹಾವೀರ ಭವನ ಹತ್ತಿರ ಎಡತಿರುವ ಪಡೆದು, ಗುರುದೇವ ರಾನಡೆ ರಸ್ತೆ, ಭಗತ್ ಸಿಂಗ್ ಗಾರ್ಡನ್ ಪಕ್ಕದ ರಸ್ತೆ, ಆದರ್ಶ ನಗರ, ವಡಗಾಂವ ಪ್ರದೇಶದ ಗ್ರಾಮೀಣ ಪೊಲೀಸ್ ಠಾಣೆ ಮುಂದಿನಿಂದ ಭಾಗ್ಯನಗರ 10ನೇ ಕ್ರಾಸ್ ಮುಖಾಂತರ ಅನಗೋಳ ಹರಿ ಮಂದಿರ ಕ್ರಾಸ್ ಸೇರಿ ಮುಂದುವರೆಯಬೇಕಾಗಿದೆ.

ನೋ-ಪಾರ್ಕಿಂಗ್ ವಲಯ:

ಗೋವಾವೇಸ್ ಸರ್ಕಲ್‌ದಿಂದ ಅನಗೋಳ ಕ್ರಾಸ್ ವರೆಗೆ ಖಾನಾಪೂರ ರಸ್ತೆಯ ಎರಡೂ ಬದಿಯಲ್ಲಿ ವಾಹನ ನಿಲ್ಲಿಸಲು ನಿರ್ಬಂಧಿಸಲಾಗಿದ್ದು, ಸುಗಮ ಸಂಚಾರಕ್ಕೆ ಸಹಕರಿಸಲು ಸಾರ್ವಜನಿಕರಿಗೆ ವಿನಂತಿ ಮಾಡಲಾಗಿದೆ.

ವಸ್ತುಗಳ ನಿಷೇಧ:

ಮತ ಎಣಿಕೆ ಸಮಯದಲ್ಲಿ ಅಧಿಕಾರಿ, ಸಿಬ್ಬಂದಿ ಮತ್ತು ಏಜೆಂಟರು ತಮ್ಮ ಜೊತೆಗೆ ಮೊಬೈಲ್ ಫೋನ್, ಪಾನ ಬೀಡಾ/ಗುಟಖಾ ಪಾಕೇಟ್, ಇಂಕ್ ಪೆನ್, ಕ್ಯಾಮೆರಾ, ಬೆಂಕಿಪೊಟ್ಟಣ, ಲೈಟರ್, ಪ್ಲಾಸ್ಟಿಕ್ ವಸ್ತುಗಳು ಹಾಗೂ ಅಗ್ನಿಕಾರಕ ವಸ್ತುಗಳನ್ನು ತರದಂತೆ ಕೋರಲಾಗಿದೆ.

Read More Articles