ಹವಾಮಾನ ವೈಪರಿತ್ಯ ಕೈ ಕೊಟ್ಟ ಲಕ್ಷಾಂತರ ರೂ. ದ್ರಾಕ್ಷಿ ಬೆಳೆ
- shivaraj B
- 17 Oct 2024 , 7:12 PM
- Chikodi
- 788
ಚಿಕ್ಕೋಡಿ : ತಾನು ಬೆಳೆದ ಲಕ್ಷಾಂತರ ರೂಪಾಯಿ ಮೌಲ್ಯದ ದ್ರಾಕ್ಷಿ ಗಿಡಗಳನ್ನು ಕಡಿದು ಹಾಕಿದ

ಅಥಣಿ ತಾಲೂಕಿನ ತೆಲಸಂಗ ಗ್ರಾಮದ ರೈತ. ಕಾಶೀಮಸಾಬ್ ಮುಜಾವರ್, ಕಳೆದ 2 ವರ್ಷಗಳಿಂದ ಸರಿಯಾಗಿ ಮಳೆಯಾಗದ ಹಿನ್ನೆಲೆಯಲ್ಲಿ ನಷ್ಟದಲ್ಲಿರುವಂತಹ ರೈತ.

ಬೇಸಿಗೆ ಸಮಯದಲ್ಲಿ ಟ್ಯಾಂಕರ ಮೂಲಕ ನೀರು ಪೂರೈಸಿ ಸಾಲದ ಸುಳಿಯಲ್ಲಿ ಸಿಲುಕಿದ್ದ ದ್ರಾಕ್ಷಿ ಬೆಳೆಯಲು ಲಕ್ಷಾಂತರ ಹೂಡಿಕೆ ಮಾಡಿ ಈತ ಕಂಗಾಲಾಗಿದ್ದ ಸರಿಯಾದ ಸಮಯಕ್ಕೆ ಕೈಗೆ ಬೆಳೆ ಬಾರದ ಹಿನ್ನಲೆ ಕೊಡಲಿಯಿಂದ ದ್ರಾಕ್ಷಿ ಗಿಡಗಳನ್ನು ಕಡಿದು ಹಾಕಿದ್ದಾನೆ.
ಸರ್ಕಾರದಿಂದ ಬರುವ ಬೆಳೆ ವಿಮೆ ಹಣದಲ್ಲಿಯೂ ಸಹ ತಾರತಮ್ಯ ಆಗಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾನೆ.
ಬೆಳೆ ಹಾನಿಗೆ ಸರ್ಕಾರದಿಂದ ಪರಿಹಾರ ನೀಡುವಂತೆ ಮನವಿ ಮಾಡುತ್ತಿದ್ದಾನೆ.
ವರದಿ : ರಾಹುಲ್ ಮಾದರ










