ಭಾರತನಗರ ಕ್ಷೇಮಾಭಿವೃದ್ಧಿ ಸಂಘಕ್ಕೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಚಾಲನೆ

ಬೆಳಗಾವಿ:  ಗಣೇಶಪುರದ ಭಾರತ ನಗರದಲ್ಲಿ ನೂತನವಾಗಿ ಆರಂಭಿಸಲಾಗಿರುವ ಭಾರತ ನಗರ ಕ್ಷೇಮಾಭಿವೃದ್ಧಿ ಸಂಘವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಉದ್ಘಾಟಿಸಿದರು. 

promotions

ಬಳಿಕ ಮಾತನಾಡಿದ ಸಚಿವರು, ನಗರದ ಸ್ವಚ್ಚತಾ ಕಾರ್ಯ, ಅಭಿವೃದ್ಧಿ ಕಾರ್ಯಗಳ ಚಿಂತನೆ ಈ ಸಂಘದ ಉದ್ದೇಶವಾಗಿದ್ದು, ಆಗಬೇಕಿರುವ ಎಲ್ಲ ಅಭಿವೃದ್ಧಿ ಕೆಲಸಗಳಿಗೆ ಹಾಗೂ ಈ ಸಂಘಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು. 

promotions

ಇಂಥ ಸಂಘಗಳಿಂದ ನಾಗರಿಕರಲ್ಲಿ ಒಗ್ಗಟ್ಟು ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ. ಕ್ರಿಯಾಶೀಲವಾಗಿ ಕೆಲಸ ಮಾಡಿ. ಎಲ್ಲರೂ ಸೇರಿ ಸಕಾರಾತ್ಮಕ ಬದಲಾವಣೆ ತರೋಣ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಹನುಮಂತ ರೇಡೆಕರ್, ಚೈತ್ರಾ, ಎ.ಕೆ.ಎಮ್.ಎಸ್ ಚೇರಮನ್ ಅಶೋಕ್, ಮೋಹನ್ ಸಾಂಬ್ರೇಕರ್, ಪ್ರಿಯಾಂಕಾ ಶಿಕ್ರೆ, ಅಶೋಕ ಮಹೆಚರಿ ಮೊದಲಾದವರು ಉಪಸ್ಥಿತರಿದ್ದರು.

Read More Articles