ಪ್ರವಾಹ ಪರಿಸ್ಥಿತಿ ಅವಲೋಕಿಸಿದ ಮೃಣಾಲ್ ಹೆಬ್ಬಾಳಕರ್
- shivaraj B
- 1 Aug 2024 , 7:40 PM
- Belagavi
- 7559
ಅರಬಾವಿ: ಯುವ ಕಾಂಗ್ರೆಸ್ ನಾಯಕ ಮೃಣಾಲ್ ಹೆಬ್ಬಾಳಕರ್ ಅವರು ಗುರುವಾರ ಅರಭಾವಿ ವಿಧಾನಸಭಾ ಕ್ಷೇತ್ರದ ಪ್ರವಾಹ ಪೀಡಿತ ಮೆಳವಂಕಿ, ಉದಗಟ್ಟಿ, ತಳಕಟನಾಳ, ವಡರಟ್ಟಿ, ಬಸಳಿಗುಂದಿ, ನಲ್ಲನಟ್ಟಿ, ಸುಣಧೋಳಿ, ತಿಗಡಿ, ಅವರಾದಿ, ಆಳನಟ್ಟಿ ಹುಣಶ್ಯಾಳ್, ಬಳೋಬಾಳ, ಬಿರನಗಡ್ಡಿ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ, ಪ್ರವಾಹದಿಂದ ನಾಶವಾಗಿರುವ ಬಗ್ಗೆ ಮಾಹಿತಿ ಪಡೆದು, ವಿವಿಧ ಕಾಳಜಿ ಕೇಂದ್ರಗಳಿಗೆ ತೆರಳಿ, ಆಹಾರ ಸಾಮಗ್ರಿಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ನ ಮುಖಂಡರು, ಕಾರ್ಯಕರ್ತರು, ಆಯಾ ಗ್ರಾಮಗಳ ಜನರು ಉಪಸ್ಥಿತರಿದ್ದರು.











