ಜೈನ ಮುನಿಗಳ ಆಶಿರ್ವಾದ ಪಡೆದ ಮೃಣಾಲ ಹೆಬ್ಬಾಳಕರ್
- shivaraj bandigi
- 4 Apr 2024 , 1:01 PM
- Belagavi
- 408
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ್ ಗುರುವಾರ ಬೆಳಗಾವಿಯ ಪಾಂಗುಳ ಗಲ್ಲಿಯಲ್ಲಿರುವ ಚಂದ್ರ ಪ್ರಭು ಶ್ವೇತಾಂಬರ ಜೈನ ಬಸದಿಗೆ ತೆರಳಿ, ಪರಮ ಪೂಜ್ಯ ಕುಂದ ಕುಂದ ಸುರೇಶ್ವರ ಜೀ ಮಹಾರಾಜ ಸಾಹೇಬ್, ಪರಮ ಪೂಜ್ಯ ಆಚಾರ್ಯ ವಿಜ್ಞಾನಪ್ರಭಾ ಸುರೇಶ್ವರ ಜೀ ಮಹಾರಾಜ ಸಾಹೇಬ್ ಹಾಗೂ ಇವರ ಶಿಷ್ಯರಾದ ಪರಮ ಪೂಜ್ಯ ಮುನಿ ನಿರಮೋಹಪ್ರಭಾ ಅವರ ದರ್ಶನ ಪಡೆದು, ಈ ಎಲ್ಲ ಆಚಾರ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದರು.












