ಉಕ್ಕಿ ಹರಿಯುತ್ತಿರುವ ಮಲಪ್ರಭೆ ! ರಾಮದುರ್ಗದ ಕೆಲ ಜಮೀನುಗಳು ಜಲಾವೃತ

ರಾಮದುರ್ಗ : ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಉಕ್ಕಿಹರಿಯುತ್ತಿರುವ ಮಲಪ್ರಭಾ ನದಿಯಿಂದ ರೈತರ ಜಾಮೀನುಗಳು ನೀರು ನುಗ್ಗುತ್ತಿದ್ದು, ಸಂಪೂರ್ಣವಾಗಿ ಜಲಾವೃತವಾಗಿವೆ. 

promotions

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಸುರೇಬಾನ, ಅವರಾದಿ,ಮುದುಕವಿ,ಚಿಕ್ಕತಡಸಿ ಗ್ರಾಮದ ರೈತರ ಜಮೀನಿಗಳಲ್ಲಿ ನೀರು ನುಗ್ಗಿ, ಗೋವಿನ್ ಜೋಳ, ಕಬ್ಬು, ಈರುಳಿ ಬೆಳೆಗಳು ಸಂಪೂರ್ಣವಾಗಿ ನೀರಿನಲ್ಲಿ ಜಲಾವೃತವಾಗಿವೆ. 

promotions

ಮಲಪ್ರಭಾ ಜಲಾನಯನ ಪ್ರದೇಶದಲ್ಲಿ ಧಾರಕಾರ ಮಳೆಯಿಂದ ತನ್ನ ವ್ಯಾಪ್ತಿಮೀರಿ ಹರಿಯುತ್ತಿರುವ ಮಲಪ್ರಭಾ ನದಿಯ ಪ್ರಭಾವದಿಂದಾಗಿ ರಾಮದುರ್ಗ ತಾಲೂಕಿನಲ್ಲಿ ಮಳೆಯಾಗದಿದ್ದರೂ ಸಹ ಮಲಪ್ರಭಾ ನದಿತೀರದಲ್ಲಿ ಪ್ರವಾಹದ ಭೀತಿ ಎದುರಾಗಿದೆ.

Read More Articles