ಕಬ್ಬಿನ ಬಾಕಿ ಬಿಲ್ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ!
- shivaraj bandigi
- 19 Jun 2024 , 1:54 PM
- Belagavi
- 4366
ಬೆಳಗಾವಿ : ಬಾಕಿ ಉಳಿದಿರುವ ಕಬ್ಬಿನ ಬಿಲ್ಲ ಪಾವತಿಸುವಂತೆ ಆಗ್ರಹಿಸಿ, ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬಿಲ್ ಬಾಕಿ ಇಟ್ಟುಕೊಂಡಿರುವ ಸಕ್ಕರೆ ಕಾರ್ಖಾನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು,

ಹಂಗಾಮಿನ ಕೊನೆಯಲ್ಲಿ ಆಗಿರುವ ಲಾಭಾಂಶವನ್ನು ರೈತರಿಗೆ ನೀಡಬೇಕು, ಬಾಕಿ ಹಣ ಬಿಡುಗಡೆ ಮಾಡೋವರೆಗೂ ಪ್ರತಿಭಟನೆ ಕೈಬಿಡಲ್ಲ ಎಂದು ರೈತರ ಪಟ್ಟು ಹಿಡಿದಿದ್ದಾರೆ.










