ಆರ್. ಅಶೋಕ ವಿಪಕ್ಷ ನಾಯಕ : ಸದಾನಂದ ಹರ್ಷ
- Shivaraj Bandigi
- 14 Jan 2024 , 11:20 PM
- Belagavi
- 363
ಬೆಳಗಾವಿ : ಬಿಜೆಪಿಯಿಂದ ವಿರೋಧ ಪಕ್ಷದ ನಾಯಕನಾಗಿ ಆಯ್ಕೆಯಾದ ಆರ್. ಅಶೋಕ ಅವರಿಗೆ ಬೆಳಗಾವಿ ಉತ್ತರ ಯುವ ಮೋರ್ಚಾ ಅಧ್ಯಕ್ಷ ಸದಾನಂದ ಗುಂಟ್ಟೆಪ್ಪನವರ ಹರ್ಷ ವ್ಯಕ್ತಪಡಿಸಿದ್ದಾರೆ.

ಸಂಘಟನಾ ಚತುರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಗರಡಿಯಲ್ಲಿ ಪಳಗಿರುವ ಆರ್. ಅಶೋಕ ಅವರಿಗೆ ವಿರೋಧ ಪಕ್ಷದ ನಾಯಕರಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದು ಸದಾನಂದ ತಿಳಿಸಿದ್ದಾರೆ.











