ಉಗಾರ ಖುರ್ದ ವಾಲ್ಮೀಕಿ ನಗರ ವಾಸಿಗಳು ರಸ್ತೆಯಿಂದ ವಂಚಿತ. ಕಂಡು ಕಾಣದ ಅಧಿಕಾರಿಗಳು

ಚಿಕ್ಕೋಡಿ : ಜೀವ ಪಣಕ್ಕಿಟ್ಟು ಶಾಲೆಗೆ ತೆರಳುತ್ತಿರುವ ಉಗಾರ ಖುರ್ದಗ್ರಾಮದ ವಾಲ್ಮೀಕಿ ನಗರದ ವಿದ್ಯಾರ್ಥಿಗಳು ಈ‌ ಶಾಲಾ ಮಕ್ಕಳ ದುಸ್ಥಿತಿ ನೋಡಿದ್ರೆ ಅಯ್ಯೋ ಅನಿಸುತ್ತೆ. 

promotions

ರಸ್ತೆಯ ಮೇಲೆ ಹರಿಯುವ ನೀರಿನಲ್ಲಿ ಶಾಲೆಗೆ ತೆರಳಬೇಕಾದ ಪರಿಸ್ಥಿತಿ. ಕಾಂಗ್ರೆಸ್ ಶಾಸಕ ರಾಜು ಕಾಗೆ ತವರೂರಲ್ಲೇ ಮೂಲಭೂತ ಸೌಕರ್ಯಕ್ಕೆ ಕುತ್ತು ಇದೆ. 

promotions

ಮಳೆ ಬಂದರೆ ಸಾಕು ಹಳ್ಳದಂತಾಗುವ ಈ ರಸ್ತೆಯು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರ ಖುರ್ದ ಗ್ರಾಮದಲ್ಲಿದೆ.

ಈ ಕುರಿತು ಸಾಕಷ್ಟು ಸಲ ಮನವಿ ಮಾಡಿದರೂ ಸಹ ಎಚ್ಚೆತ್ತುಕೊಳ್ಳದ ಜನಪ್ರತಿನಿಧಿಗಳು ಅಧಿಕಾರಿಗಳು ರಸ್ತೆಯ‌ ದುಸ್ಥಿತಿ ಕಂಡು ಕಾಣದಂತೆ ಕುಳಿತಿದ್ದಾರೆ. 

200 ಕುಟುಂಬಗಳು ವಾಸಿಸುವ ಜನರಿಗೆ ಇಲ್ಲ ರಸ್ತೆಯ ಭಾಗ್ಯ. ರಸ್ತೆ ಮಾಡದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಗ್ರಾಮಸ್ಥರು.

Read More Articles