ಮೂಡಲಗಿ ಶೈಕ್ಷಣಿಕ ಪ್ರಗತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಿತೇಶಕುಮಾರ

ಮೂಡಲಗಿ: ಮಕ್ಕಳ ಕಲಿಕಾ ಪ್ರಗತಿ, ಶಾಲಾ ದಾಖಲಾತಿ, ಬಿಸಿಯೂಟ, ಮೂಲಭೂತ ಸೌಲಭ್ಯಗಳು, ಶಾಲಾ ಸಮಗ್ರ ಪರಿಸರ ಹಾಗೂ ಸಿಬ್ಬಂದಿಗಳ ಪಾಲ್ಗೊಳ್ಳುವಿಕೆ ಪ್ರಶಂಸಾರ್ಹವಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳಾದ ರಿತೇಶಕುಮಾರ ಸಿಂಗ ಹರ್ಷವ್ಯಕ್ತಪಡಿಸಿದರು.

promotions

ಅವರು ಬುಧವಾರದಂದು ಮೂಡಲಗಿ ಶೈಕ್ಷಣಿಕ ವಲಯದ ಮೆಳವಂಕಿಯ ಸಿದ್ದಾರೋಡ ಮಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಡೇರಟ್ಟಿಯ ಸಮೂಹ ಸಂಪನ್ಮೂಲ ಕೇಂದ್ರ, ಕಸ್ತೂರಿ ಬಾ ಗಾಂಧೀ ಬಾಲಿಕೆಯರ ವಸತಿ ನಿಲಯ, ಸರಕಾರಿ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಶಾಲೆಗಳಿಗೆ ಆಕಸ್ಮಿಕ ಭೇಟಿ ನೀಡಿದರು. ಸರಕಾರಿ ಶಾಲೆಗಳಲ್ಲಿ ದಾಖಲಾತಿಯ ಕೊರತೆ ಎದ್ದು ಕಾಣುವ ಸಂದರ್ಭದಲ್ಲಿ ಅತೀ ಹೆಚ್ಚು ದಾಖಲಾತಿ ಹೊಂದುವದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಮೆಳವಂಕಿಯ ಸಿದ್ದಾರೋಡ ಮಠ ಶಾಲೆಯು ೭೨೮ ಮಕ್ಕಳನ್ನು ಹಾಗೂ ೧೦ ಜನ ಶಿಕ್ಷಕರನ್ನು ಹೊಂದುವದರ ಮೂಲಕ ಮಾದರಿ ಶಾಲೆಯಾಗಿದೆ. ಕಲಿಕೆ ಫಲಪ್ರದವಾಗುವ ನಿಟ್ಟಿನಲ್ಲಿ ಶಿಕ್ಷಕ ಸಮೂಹದ ಪಾತ್ರ ಮೆಚ್ಚವಂತಾಗಿದೆoದರು.

promotions

ಸರಕಾರಿ ಶಾಲೆಗಳಲ್ಲಿ ಅನೇಕ ಕಲಿಕಾ ಕಾರ್ಯಚಟುವಟಿಕೆಗಳು, ಪಠ್ಯದ ಜೊತೆಗೆ ಸಹ ಪಠ್ಯ ಚಟುವಟಿಕೆಗಳು ಹಾಗೂ ಪೌಷ್ಠಿಕಾಂಶಯುಕ್ತ ಉಪಹಾರದ ವ್ಯವಸ್ಥೆ ಉತ್ತಮ ರೀತಿಯದಾಗಿದೆ. ಉತ್ತಮ ರೀತಿಯಾದ ಕಲಿಕಾ ಪರಿಸರ ಸೃಷ್ಠಿಸಿದರೆ ಮಕ್ಕಳ ನಲವಿನ ಕಲಿಕೆಗೆ ಸಹಾಯಕವಾಗುವದು. ಮಕ್ಕಳ ಕಲಿಕೆಗೆ ಪೂರಕ ಚಟುವಟಿಕೆಗಳನ್ನು ಒದಗಿಸುವದು ಅತ್ಯಾವಶ್ಯಕವಾಗಿದೆ ಎಂದರು.

    ಈ ಸಂದರ್ಭದಲ್ಲಿ ಅತೀ ಹೆಚ್ಚು ದಾಖಲಾತಿ ಹೊಂದಿರುವ ಮೆಳವಂಕಿಯ ಸಿದ್ದಾರೋಡ ಮಠ ಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯ ಈರಣ್ಣ ಕಡಕೋಳ ಹಾಗೂ ಶಾಲಾ ಸಿಬ್ಬಂದಿಯವರನ್ನು ಪ್ರಶಂಸಿಸಿ ಅಭಿನಂದನಾ ಪತ್ರ ನೀಡಿದರು.

 ಈ ಸಂದರ್ಭದಲ್ಲಿ ಧಾರವಾಡ ಅಪರ ಆಯುಕ್ತರಾದ ಜಯಶ್ರೀ ಶಿಂತ್ರಿ, ಅಪರ ಆಯುಕ್ತರಾದ ಆಕಾಶ, ಚಿಕ್ಕೋಡಿಯ ಡಿಡಿಪಿಯು ಪಾಂಡುರoಗ ಭಂಡಾರೆ, ದಾರವಾಡದ ಡಿಡಿಪಿಐ ಸಂಜೀವ ಬೆಂಗೇರಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಗೋಕಾಕ ಬಿಇಒ ಜಿ.ಬಿ ಬಳಗಾರ, ಮದ್ಯಾಹ್ನ ಉಪಹಾರ ಯೋಜನೆಯ ಸಹಾಯಕ ನಿರ್ದೇಶಕ ಎ.ಬಿ ಮಲಬನ್ನವರ, ಸಿ.ಆರ್.ಪಿ ಎಮ್.ಎಲ್ ಅಮಣಿ ಹಾಜರಿದ್ದರು.

Read More Articles