ಗಾಂಜಾ ಮತ್ತು ಪನ್ನಿ ತಡೆಗಟ್ಟುಲು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದ ಜಯ ಕರ್ನಾಟಕ ಸಂಘಟನೆ

ಬೆಳಗಾವಿ :ನಗರದಲ್ಲಿ ಇತ್ತಿಚಿಗೆ ಗಾಂಜಾ ಮತ್ತು ಪನ್ನಿ ಚಟುವಟಿಕೆಗಳು ಬಹಳಷ್ಟು ನಡೆಯುತ್ತಿದ್ದು, ಇದರಿಂದ ದೇಶದ ಭವಿಷ್ಯ ಹಾಳಾಗುತ್ತಿದೆ. ಹಲವಾರು ಶಾಲೆ, ಕಾಲೇಜು ಮತ್ತು ಕೋಚಿಂಗ ಸೆಂಟರಗಳ ಕಡೆ ಮುಚ್ಚಿ ಮುಚ್ಚಿ ಗಾಂಜಾ ಮತ್ತು ಪತ್ನಿಯನ್ನು ಮಾರಾಟ ಮಾಡುತ್ತಿದ್ದಾರೆ. 

promotions

ಇದರಿಂದ ವಿದ್ಯಾರ್ಥಿಗಳ ಶಿಕ್ಷಣ, ಮತ್ತು ಜೀವನ ಎರಡು ಹಾಳಾಗುತ್ತಿದೆ. ಮುಂಬರುವ ಮಾರ್ಚ ಮತ್ತು ಎಪ್ರಿಲ್ ತಿಂಗಳಿನಲ್ಲಿ ಹತ್ತನೆ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಗಳ ಜರಗುತ್ತಿದ್ದು, ಈ ಸಮಯದಲ್ಲಿ ವಿದ್ಯಾರ್ಥಿಗಳ ಗಮನ ವಿಧ್ಯಾಭ್ಯಾಸದ ಕಡೆ ಇರದೇ ಗಾಂಜಾ ಮತ್ತು ಪನ್ನಿ ಕೆಟ್ಟ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದು, ಇದರಿಂದ ಮುಂಬರುವ ವಿದ್ಯಾರ್ಥಿಗಳ ಜೀವನ ಹಾಳಗದಂತೆ ಜಾಂಗಾ ಮತ್ತು ಪನ್ನಿ ಮಾರಾಟ ಮಾಡುವವರ ವಿರುದ್ದ ಪೊಲೀಸ ಇಲಾಖೆಯವರು ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.

promotions

Read More Articles