ಶಿಕ್ಷಣದಲ್ಲಿ ಕ್ರಾಂತಿನಾಡಿನ ಕೊಡುಗೆ ಅಪಾರ ! ಎಂಎಸ್ ಮಾಳಿ

ಬೈಲಹೊಂಗಲ :  ಐತಿಹಾಸಿಕ ನಾಡಿನಲ್ಲಿ ಶತಮಾನ ಪೂರೈಸಿದ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಇಂದು ದೇಶ, ಹೊರದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡುತ್ತಿರುವದು ಶಿಕ್ಷಕ ವೃತ್ತಿಯ ಸಾರ್ಥಕತೆಯನ್ನು ತೋರಿಸುತ್ತದೆ ಎಂದು ಪಟ್ಟಣದ ಪುರಸಭೆಯ ಶೂರ ಸಂಗೊಳ್ಳಿ ರಾಯಣ್ಣ ಪ್ರೌಡಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಎಂ.ಎಮ್. ಮಾಳಿ ಹೇಳಿದರು. 

promotions

ಅವರು ರವಿವಾರ ಹೊಸೂರು ರಸ್ತೆಯ ಬ್ಯಾಡ್ಮಿಂಟನ್ ಹಾಲದಲ್ಲಿ ಸನ್ 1985 ನೇ ಸಾಲಿನ ಎಂಕೆಸಿಆರ್, ಎಂಜೆ ಹೈಸ್ಕೂಲ್ ವಿದ್ಯಾರ್ಥಿಗಳಿಂದ ಆಯೋಜಿಸಲಾದ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದರು. 

promotions

 ಕುಮಾರಿ ಶಶಿಕಲಾ ಕರಡಿಗುದ್ದಿ

promotions

 ಪ್ರಸ್ತಾವಿಕವಾಗಿ ಮಾತನಾಡಿದರು.

ಶನಿವೃತ್ತ ಶಿಕ್ಷಕಿಯರಾದ ಬಿ. ವೈ. ಬರಮಣ್ಣವರ್, ವಿ.ವಿ. ಜೋಶಿ ಶಿಕ್ಷಣದ ಮಹತ್ವ, ಸಂಸ್ಕೃತಿ ಮತ್ತು ಸಂಪ್ರದಾಯದ ಕುರಿತು ಮಾತನಾಡಿದರು. 

ಭಾರತಿ ಮದನಬಾವಿ, ಪ್ರಕಾಶ್ ಕಾಜಗಾರ್, ಬಸವರಾಜ್ ಕೌಜಲಗಿ, ಮಹಾಂತೇಶ್ ಹರಕುಣಿ, ಶೇಖರ್ ಮೊರಬದ, ಕಾತ್ಯಾಯಿನಿ ಮುಪ್ಪಯ್ಯನವರಮಠ, ನೀಲಮ್ಮ ಶರಣಪ್ಪ ನವರ, ಮಹಾಂತೇಶ ಮೇಟಗುಡ, ಮಹಾಂತೇಶ್ ಹರಕುಣಿ ಹಾಗೂ ಮಹಾಂತೇಶ ಬಳಿಗಾರ ತಮ್ಮ ಶಾಲಾ ದಿನದ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿರೂಪಾಕ್ಷ ಗೀರನವರ, ಸುನಂದಾ ಚಿಕ್ಕಮಠ ನಿರೂಪಿಸಿದರು.

ರಮೇಶ್ ಹಿಟ್ಟಣಗಿ ಸ್ವಾಗತಿಸಿದರು. ಈರನಗೌಡ ಪಾಟೀಲ್ ವಂದಿಸಿದರು. ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಸಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಯಿತು. ವಿದ್ಯಾರ್ಜನೆ ಮಾಡಿದ ಎಲ್ಲ ಶಿಕ್ಷಕರಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎನ್. ಎಚ್. ಕುಲಕರ್ಣಿ,ಎಂ. ವೈ. ಆನಿಕಿವಿ, ಬಿ,ಬಿ. ನರಸಣ್ಣವರ, ಎನ್. ಐ. ಬಡಿಗೇರ, ಅತಿಥಿಗಳಾಗಿ ಆಗಮಿಸಿದ್ದರು.

ವರದಿ : ರವಿಕಿರಣ್  ಯಾತಗೇರಿ

Read More Articles