ರೈತರ ಜಮೀನು ಕಬಳಿಸುತ್ತಿರುವ ಸೋಲಾರ ಕಂಪನಿ ವಿರುದ್ದ ಸಿಡಿದೆದ್ದ ರೈತ ಪರ ಹೋರಾಟಗಾರರು
- Krishna Shinde
- 15 Jan 2024 , 1:23 PM
- Belagavi
- 325
ಬೆಳಗಾವಿ :ನಿಪ್ಪಾಣಿ ತಾಲೂಕಿನ ಶಿಂಡೂರ ಗ್ರಾಮದಲ್ಲಿ ಸೋಲಾರ್ ಉಜ್ವಲಾ ಕಂಪನಿ ಹಾಕುತ್ತಿದ್ದು ನೂರಾರು ಎಕರೆ ರೈತರ ಭೂಮಿಯನ್ನು ಹಣ ಕೊಡದೆ ಒತ್ತುವರಿ ಮಾಡುತ್ತಿದ್ದಾರೆ ಎಂದು ರೈತ ಪರ ಹೋರಾಟಗಾರರು ದೂರಿದ್ದಾರೆ.

ರೈತ ಕುಟುಂಬಗಳು ಬೀದಿಗೆ ಬಂದಿವೆ ಆದರೂ ಶಶಿಕಲಾ ಜೊಲ್ಲೆ ಒಂದು ಮಾತು ಕೂಡ ರೈತರ ಪರ ಮಾತನಾಡುತ್ತಿಲ್ಲ ಎಂದು ದೂರಿದ್ದಾರೆ.

ಯಾವುದೆ ಕಾರಣಕ್ಕೂ ರೈತರು ತಮ್ಮ ಜಮೀನನ್ನು ಬಿಟ್ಟು ಕೊಡುವುದಿಲ್ಲ ನಮ್ಮ ಜಮೀನು ನಮಗೆ ಉಳಿಮೆ ಮಾಡಲು ಬೇಕು ಎಂದು ಹೇಳಿದ್ದಾರೆ.










