ಕನ್ನಡ ನೆಲದಲ್ಲಿ ಮತ್ತೆ ಬಾಲ ಬಿಚಿದ ನಾಡದ್ರೋಹಿ ಎಂಇಎಸ್ ಪುಂಡರು

ಕನ್ನಡ ನೆಲದಲ್ಲಿ ಮತ್ತೆ ಬಾಲ ಬಿಚಿದ ನಾಡದ್ರೋಹಿ ಎಂಇಎಸ್ ಪುಂಡರು
ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ  ಪ್ರತಿಭಟನೆ
ಬೆಳಗಾವಿ, ಕಾರವಾರ ನಿಪ್ಪಾಣಿ ಬಾಲ್ಕಿ ಸಂಯಕ್ತ ಮಹಾರಾಷ್ಟ್ರ ಎಂದು ಘೋಷಣೆ
ಬೆಳಗಾವಿಯಲ್ಲಿ 144(3) ಸೆಕ್ಷನ್ ಜಾರಿ
ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಮನವಿ ಸ್ವೀಕರಿಸಲು ನಕಾರ
ಮಹಾರಾಷ್ಟ್ರದ ಸಚಿವರಿಗೆ ಕರ್ನಾಟಕ ಪ್ರವೇಶ ಅನುಮತಿ ನೀಡಿಲು ಒತ್ತಾಯಿಸಿ  ಬೆಳಗಾವಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾದ ಎಂಇಎಸ್ ಮುಖಂಡರು.
ಮನವಿ ಸ್ವೀಕರಿಸಲು ನಿರಾಕರಿಸಿದ ಡಿಸಿ ನಿತೇಶ್ ಪಾಟೀಲ.
ಗಡಿ ವಿಚಾರವಾಗಿ ಮಹಾರಾಷ್ಟ್ರದ ಸಚಿವರೊಂದಿಗೆ ಚರ್ಚೆ ಮಾಡಲು ಅನುಮತಿ ನೀಡಲು ಎಂಇಎಸ್ ಮನವಿ.
ಮನವಿ ಪತ್ರ ಹಿಡಿದು ಡಿಸಿ ಬರುವವರೆಗೆ ಕಚೇರಿ ಮುಂದೆ ನಿಂತ ಮುಖಂಡರು.
ಡಿಸಿ ಆಗಮಿಸುತ್ತಿದ್ದಂತೆ ಮನವಿ ಕೊಡಲು ಮುಂದಾದಾಗ.
ಆಫೀಸ್ ಒಳಗೆ ಹೋಗಿ ಬರ್ತೀನಿ ಎಂದು ಸಬೂಬು ಹೇಳಿ ಜಾರಿದ ಡಿಸಿ. ಜಾಣ ನಡೆಯಿಂದ ಪಾರಾಗಿ ಪೊಲೀಸರ ಮೂಲಕ ಮನವಿ ನಿರಾಕರಣೆ ಮಾಹಿತಿ.
ಡಿಸಿ ನಿರಾಕರಣೆ ಸುದ್ದಿ ತಿಳಿದು ಪೊಲೀಸರ ಜೊತೆ ಮಾತಿನ ಚಕಮಕಿ.
ಎಂಇಎಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು.

promotions

Read More Articles