ಯೋಗಿ ನಾಡಿನಲ್ಲಿ ಹಾಡುಹಗಲೇ ಮೈ ಜುಮ್ಮೆನ್ನಿಸುವ ಶೂಟ್ ಔಟ್
- Krishna Shinde
- 15 Jan 2024 , 12:40 PM
- Uttarpradesh
- 180
ಪ್ರಯಾಗ್ರಾಜ್ :ಆಘಾತಕಾರಿ ಘಟನೆಯೊಂದರಲ್ಲಿ, ಉತ್ತರ ಪ್ರದೇಶದ ಮಾಜಿ ಶಾಸಕ ರಾಜು ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಶುಕ್ರವಾರ ಪ್ರಯಾಗ್ರಾಜ್ನಲ್ಲಿರುವ ಅವರ ಮನೆಯ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

— Piyush Rai (@Benarasiyaa) February 25, 2023Warning: Disturbing video
Clear CCTV footage of what unfolded during the shootout in UP's Prayagraj which claim life of Umesh Pal, main witness in 2005 murder of BSP MLA Raju Pal. Multiple shooters ambushed Umesh Pal. One posing as a customer was at a shop. pic.twitter.com/RzRqEu1tGW
2005 ರ ರಾಜು ಪಾಲ್ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಅವರನ್ನು ಪ್ರಯಾಗ್ರಾಜ್ನಲ್ಲಿರುವ ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಂದ ಒಂದು ದಿನದ ನಂತರ ಯೋಗಿ ಅವರ ಎಚ್ಚರಿಕೆ ಬಂದಿದೆ. ಪಾಲ್ನ ಗನ್ನರ್ಗಳಲ್ಲಿ ಒಬ್ಬರು, ಗುಂಡಿನ ದಾಳಿಯಲ್ಲಿ ಗಾಯಗೊಂಡರು, ನಂತರ ಆಸ್ಪತ್ರೆಯಲ್ಲಿ ನಿಧನರಾದರು. ಪಾಲ್ ಅವರ ಮನೆಯ ಹೊರಗೆ ಕಚ್ಚಾ ಬಾಂಬ್ಗಳಿಂದ ದಾಳಿ ಮಾಡಿ ಗುಂಡು ಹಾರಿಸಲಾಗಿದೆ ಎಂದು ಪ್ರಯಾಗರಾಜ್ ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಹೇಳಿದ್ದಾರೆ.
ಪ್ರಯಾಗ್ರಾಜ್ನಲ್ಲಿ ನಡೆದ ಮಾರಣಾಂತಿಕ ಶೂಟೌಟ್ನ ಒಂದು ದಿನದ ನಂತರ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಶನಿವಾರ ತಮ್ಮ ಸರ್ಕಾರವು ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಫಿಯಾಗಳನ್ನು ಮುಗಿಸುತ್ತದೆ ಮತ್ತು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ. "ಇನ್ ಮಾಫಿಯೋನ್ ಕೋ ಮಿಟ್ಟಿ ಮಿ ಮಿಲಾ ದೆಂಗೆ (ಈ ದರೋಡೆಕೋರರನ್ನು ಮುಗಿಸುತ್ತೇನೆ)" ಎಂದು ಅವರು ರಾಜ್ಯ ವಿಧಾನಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
— Yogi Adityanath (@myogiadityanath) February 25, 2023माफियाओं को मिट्टी में मिला देंगे... pic.twitter.com/GgrXXRa5li










