ರಾಹುಲ್ ಗಾಂಧಿಯವರ ಕ್ಷಮೆಯಾಚನೆಗಾಗಿ ದೇಶಾದ್ಯಂತ ಪ್ರಚಾರ ಮಾಡುತ್ತೇವೆ : ಬಿಜೆಪಿ
- Krishna Shinde
- 12 Jan 2024 , 8:05 PM
- Delhi
- 148
ದೆಹಲಿ :ರಾಹುಲ್ ಗಾಂಧಿ ಎಷ್ಟು ದಿನ ದೇಶವನ್ನು ದಾರಿ ತಪ್ಪಿಸುತ್ತಾರೆ? 'ಭಾರತದ ಪ್ರಜಾಸತ್ತಾತ್ಮಕ ಹಿನ್ನಡೆಯನ್ನು ಅಮೆರಿಕ ಮತ್ತು ಯುರೋಪ್ ಗಮನಿಸಬೇಕು' ಎಂದು ಬಿಜೆಪಿ ಮತ್ತೊಮ್ಮೆ ಪುನರುಚ್ಚರಿಸಿದೆ.

ವಿದೇಶದಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಟೀಕಿಸುವ ಮೂಲಕ ಭಾರತೀಯರ ಭಾವನೆಗಳನ್ನು ಅವಮಾನಿಸುವುದು ಅವರ ಅಭ್ಯಾಸ ಎಂದು ಬಿಜೆಪಿ ಸಂಸದ ಆರ್.ಎಸ್ ಪ್ರಸಾದ ಗುಡುಗಿದ್ದಾರೆ.

ರಾಹುಲ್ ಗಾಂಧಿಯವರ ಕ್ಷಮೆಯಾಚನೆಗಾಗಿ ದೇಶಾದ್ಯಂತ ಪ್ರಚಾರ ಮಾಡುತ್ತೇವೆ. ಆಧಾರ ರಹಿತವಾಗಿ ಮಾತನಾಡುವುದು ಅವರ ಅಭ್ಯಾಸ. 'ಅಮೆರಿಕಾ ಮತ್ತು ಯುರೋಪ್ನ ಹಸ್ತಕ್ಷೇಪ' ಎಂಬ ಅವರ ಹೇಳಿಕೆಯನ್ನು ನಿರಾಕರಿಸುತ್ತಿದ್ದೇನೆ ಎಂದು ಅವರು ಇಂದು ಒಮ್ಮೆಯೂ ಹೇಳಲಿಲ್ಲ ಎಂದು ಆರ್ಎಸ್ ಪ್ರಸಾದ್ ಹೇಳಿದ್ದಾರೆ.
— BJP (@BJP4India) March 16, 2023Shri @rsprasad addresses a press conference at party headquarters in New Delhi. https://t.co/XtphZWjbfY










