ಬಿಜೆಪಿಗೆ ಸವದಿ ಗುಡ ಬೈ !
- Krishna Shinde
- 15 Jan 2024 , 12:11 AM
- Belagavi
- 138
ಅಥಣಿ : ರಾಜ್ಯ ಬಿಜೆಪಿಯಲ್ಲಿ ಟಿಕೆಟ ಹಂಚಿಕೆ ಸಂಚಲನ ಮೂಡಿಸಿದ್ದು ಟಿಕೆಟ ವಂಚಿತರು ಬಿಜೆಪಿ ವಿರುದ್ಧ ಗರಮ ಆಗಿದ್ದಾರೆ, ಅದೆ ರೀತಿ ಅಥಣಿ ಕ್ಷೇತ್ರದ ಲಕ್ಷ್ಮಣ ಸವದಿ ಬಿಜೆಪಿ ವಿರುದ್ದ ಗುಡುಗಿದ್ದು ಸಿಎಂ ಬೊಮ್ಮಾಯಿ ಮತ್ತು ಯಡಿಯೂರಪ್ಪ ಮೇಲೆ ಹರಿಹಾಯ್ದಿದ್ದಾರೆ.

ಬೊಮ್ಮಾಯಿ ಬೇಕಾದರೆ ಮುಂದಿನ ಪಿಎಂ ಆಗಲಿ ಅವರಿಗೆ ನನ್ನ ಶುಭಹಾರೈಕೆ ಇದೆ ಎಂದು ಹೇಳಿದ್ದಾರೆ.

ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಸವದಿ ಮುಂದಿನ ನಡೆ ನನ್ನ ಬೆಂಬಲಿಗರ ಜೊತೆ ಮತ್ತು ಮುಖಂಡರೊಂದಿಗೆ ಚರ್ಚಿಸಿ ಹಾಗು ಅಥಣಿ ಜನತೆಯೇ ನನ್ನ ಹೈ ಕಮಾಂಡ ಎಂದು ಹೇಳಿದ್ದಾರೆ.










