ನೆಲದ ಸ್ಪರ್ಶವೆ ಇಲ್ಲದೆ ಬೆಳೆಯುವ ಈ ಬಳ್ಳಿಯ ವಿಶೇಷತೆ ನಿಮಗೆ ಗೊತ್ತೆ
- shivaraj bandigi
- 14 Feb 2024 , 10:18 AM
- Belagavi
- 1452
ಅಥಣಿ : ವೈದ್ಯಕೀಯ ಕ್ಷೇತ್ರದಲ್ಲಿ ಜಗತ್ತು ಎಷ್ಟೆ ಮುಂದುವರೆದರು ಗ್ರಾಮೀಣ ಕ್ಷೇತ್ರದಲ್ಲಿ ಆಯುರ್ವೇದ ಪದ್ಧತಿ ಔಷದ ಜಣರೂಡಿಯಾಗಿದೆ

ಅಂತರ ಗಂಗೆ, ಅಮೃತ ಬಳ್ಳಿ ಮಂಗನ ಬಳ್ಳಿ,ಹೀಗೆ ಹಲವು ಬಗೆಯ ಹೆಸರಿನಿಂದ ಕರೆಯಲ್ಪಡುವ ಈ ಬಳ್ಳಿ ಮಂಗನ ಬಾವು, ಗಂಟಲ ಬಾವು ರೋಗಗಳಿಗೆ ರಾಮ ಬಾಣವಾಗಿದೆ..

ಮಕ್ಕಳ ಗಂಟಲಿನ ಭಾಗದಲ್ಲಿ ಉತ ಬಂದು ಎರಡು ಮುರು ದಿನಗಳ ಕಾಲ ಚಳಿ ಜ್ವರ ವಾಂತಿ ಇಂತಹ ಗುಣಲಕ್ಷ ಹೊಂದಿದ ರೋಗ ಕಂಡರೆ ಅದನ್ನ ಸಾಮಾನ್ಯವಾಗಿ ಮಂಗನ ಬಾವು ಎಂಬ ಹೆಸರಿನಿಂದ ಕರೆಯಲಾಗುತ್ತದೆ.
ಈ ಬಳ್ಳಿ ಸಾಮಾನ್ಯವಾಗಿ ನೆಲದ ಸ್ಪರ್ಶವಿಲ್ಲದೆ ಉಳಿದ ಸಸ್ಯ ಗಿಡಗಳ ಸಹಾಯದಿಂದ ಬೆಳೆಯುವ ಬಳ್ಳಿಯಾಗಿದೆ ಈ ಬಳ್ಳಿ ಗಂಟಲ ಬಾವು( ಮಂಗನ ಬಾವು) ರೋಗಕ್ಕೆ ಪರಿಣಾಮಕಾರಿಯಾಗಿದೆ ಇದನ್ನ ಜಜ್ಜಿ ಇದರಿಂದ ಬರುವ ರಸ ಊದಿದ ಜಾಗದಲ್ಲಿ ಲೇಪನ ಮಾಡಿದರೆ ಎರಡು ಮೂರು ದಿನಗಳಲ್ಲಿ ಮಂಗನ ಬಾವು ಕಾಯಿಲೆ ಕಡಿಮೆ ಆಗುತ್ತದೆ ಅಂತಾರೆ ಗ್ರಾಮಸ್ಥರು.










