
ಒಲಂಪಿಕ್ಸ್ ವಿಜೇತರಿಗೆ ಮುಖ್ಯಮಂತ್ರಿಗಳಿಂದ ಪ್ರಶಸ್ತಿ ವಿತರಣೆ
ಬೆಂಗಳೂರು- ಕರ್ನಾಟಕ 2025 ಕ್ರೀಡೆಯ ವಿವಿಧ ವಿಭಾಗದಲ್ಲಿ ಕ್ರೀಡಾಪಟುಗಳು ಅತ್ಯಂತ ಉತ್ಸಾಹ ಮತ್ತುಕ್ರೀಡಾ ಮನೋಭಾವನೆಯಿಂದ ಆಡಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಸಾಧನೆಯನ್ನು ಇತರೆ ಕ್ರೀಡಾಪಟುಗಳು ಸ್ಪೂರ್ತಿಯಾಗಿ ಪಡೆದುಕೊಂಡು ರಾಷ್ಟ್ರಕ್ಕಾಗಿ ಆಡಬೇಕೆಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅವರು ಇಂದು ರಾಜಭವನದಲ್ಲಿ ಕರ್ನಾಟಕ ಒಲಂಪಿಕ್ಸ್ 2025 ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು.

ರಾಜ್ಯಪಾಲ, ಥಾವರಚಂದ ಗೆಹ್ಲೋಟ್, ಗೃಹ ಸಚಿವ ಪರಮೇಶ್ವರ, ಓಲಂಪಿಕ್ ಅಸೋಸಿಯೇಷನ್ ಅಧ್ಯಕ್ಷ, ವಿಪ ಸದಸ್ಯ ಗೋವಿಂದರಾಜು ಇದ್ದರು.










